ಡೊಳ್ಳನ ಪದ

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ
ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ
ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ||

ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ
ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧||

ವಿದ್ಯೆಯ ಕಲಿಯಿರಿ ಬುದ್ದಿಯ ಬೆಳೆಸಿರಿ ಅದುವೇ ಸಂಪತ್ತು ಅಂದಾವೆ
ನಿಮ್ಮ ಉದ್ದಾರ ನಿಮ್ಮ್ಮ ಕೈಯಾಗೆ ಎನ್ನುತ ಕತ್ತಲೆ ಕೊಂದಾವೆ ||೨||

ಹೆಬ್ಬಟ್ಟು ಗುರುತು ನರನಿಗೆ ಶಾಪಾ
ಶಾಪವ ಬಿಡಿಸಾಕೆ ಬಂದಾವೆ
ದೇವರ ಲೋಕದ ಒಳಗಡೆ ಪರವೇಶ
ಅಂಥಾವ್ರಿಗಿಲ್ಲಂತ ಸಾರ್ಯಾವೆ ||೩||

ಇಲ್ಲಿಯವರೆಗೆಲ್ಲ ಓದಿದ್ದ ತಲೆಗಳು
ನಮ್ಮನ್ನ ಕಾಲಾಗೆ ತುಳಿದಾವೆ
ಕೆಳಗೆ ಬಿದ್ದವರೆಲ್ಲ ಮ್ಯಾಲೆದ್ದು ನಿಲ್ಲಾಕ
ಆಸರೆ ಒಂದಾ ತಂದಾವೆ ||೪||

ಮಕ್ಕಳು ಭಾಳಾ ದೇಶಕೆ ಭಾರಾ
ಭಾರತ ಮಾತೆಯ ಕೊಂದಾವೆ
ಒಂದೊಂದು ಮನಿಯಾಗೆ ಇಬ್ಬರು ಮಕ್ಕಳು
ಸಾಕೇ ಸಾಕು ಅಂದಾವೆ ||೫||

ಆರೋಗ್ಯ ಜೀವನ ಸ್ವಚ್ಛತೆ ಜೀವನ
ಅದುವೇ ಸ್ವರ್ಗಾ ಅಂದಾವೆ
ಕಾಯಿಲೆಗಳಿಗೆಲ್ಲ ದೇವರ ಗುರಿ ಮಾಡಿ
ಮೂಢರಾಗಬೇಡಿ ಅಂದಾವೆ ||೬||

ಹೆಣ್ಣು ಗಂಡೂ ಒಲವಿನ ಬಾಳಿಗೆ
ಸರಳ ವಿವಾಹವೆ ಸರಿ ನೋಡ್ರಿ
ಅದ್ದೂರಿ ಗದ್ದಲ ವೈಭವದ ಮದುವೆಯ
ಮಾಡುತ ಸಾಲದಿ ಕೊಳಿಬ್ಯಾಡ್ರಿ ||೭||

ಗಂಡೂ ಹೆಣ್ಣೂ ಎರಡೂ ಕಣ್ಣು
ದೇವರ ಲೀಲ್ಯಾಗ ಅಂದಾವೆ
ಹೆಣ್ಣನು ತುಳಿಯುತ ಬದುಕುವ ಗಂಡು
ಗಂಡಲ್ಲ ಭಂಡಾ ಅಂದಾವೆ ||೮||

ಪುರಾಣ ಕತೆಗಳ ಕತೆಯಂತೆ ನೋಡಿರಿ
ನೂರಕ್ಕೆ ನೂರು ನಿಜವಲ್ಲ
ಧರ್ಮದ ಮರ್ಮವ ಸರಿಯಾಗಿ ತಿಳಿಯಿರಿ
ಧರ್ರ್ಮಾಂಧತೆಯಿಂದ ಉಳಿವಿಲ್ಲ ||೯||

ಮಾನವರೆಲ್ಲ ಒಂದೇ ಎನ್ನಿರಿ
ಭೇದವ ಮಾಡೋದು ಮಹಾಪಾಪ
ಮೇಲು ಕೀಳೆನ್ನುತ ಮೆರೆಯುವ ಮೂರ್ಖರಿಗೆ
ದೇವರು ಕೊಡತಾವ ಹಿಡಿಶಾಪ ||೧೦||

ಎಲ್ಲರು ಕೂಡುತ ದುಡಿಯುತ ಹಾಡುತ
ಬಾಳಿರಿ ಎನ್ನುತ ಹರಸ್ಯಾವೆ
ಎಲ್ಲರಿಗಾಗಿಯೆ ಎಲ್ಲರು ಇದುವೇ
ಮಾನವ ಧರ್ಮೆಂದು ಸಾರ್ಯಾವೆ ||೧೧||

******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಷ್ಯಾ
Next post ಮನೆ ವಿಮೆ : ಏನು? ಹೇಗೆ?

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys